ಗರ್ದಿಗಮ್ಮತ್ತು ಮತ್ತು ಹಾಲಿವುಡ್

ನಡುರಾತ್ರಿ ಜೋರಾಗಿ
ಮಳೆ ಬೀಳಾಕ ಸುರುವಾಗಿತ್ತು
ಹಾಲಿವುಡ್ ಪಿಕ್ಚರ್ ಅರ್ಧನೋಡಿ
ಆ ಲೋಕದಾಗ ಇದ್ಹಾಂಗ ನಿದ್ದಿ ಹತ್ತಿತ್ತು.

ಅದರ ಕನಸು ಬಿದ್ದದ್ದು
ನಮ್ಮೂರಾಗ ಗರ್ದಿಗಮ್ಮತ್ತಿನ ಪೆಟಗಿಯೊಳಗ
ದಿಲ್ಲಿದರ್ಬಾರ್ ಕುತುಬ್‌ಮಿನಾರ್
ತಾಜಮಹಲ್ ಬಾಂಬೆ ಬಜಾರ್
ಸುರಯ್ಯಾ ನರ್ಗಿಸ್ ರಾಜಕಪೂರರ
ಪ್ರೇಮಾಲಾಪ ನೋಡಿದ್ಹಂಗ-

ನಮ್ಮೂರ ಜಾತ್ರಿಯೊಳಗ ಅಡ್ಡಾಡಿ
ಬೆಂಡು ಬೆತ್ತಾಸ ತಿಂದು ಮಿಂಚೋಬಳಿ
ಕೈ ತುಂಬಾ ಏರಿಸಿಕೊಂಡು
ಮುತ್ತಿನ ಸರಾ ಹಾಕ್ಕೊಂಡು
ಅದರೊಳಗಿನ ಪದಕಾ ಮುಟಗಿಯೊಳಗ
ಹಿಡಕೊಂಡು ಓಡೋಡಿ ಓಡೋಡಿ ಮನಿಗೆ ಬದ್ಹಂಗ-

ಚಕಡಿ ಹತ್ತಿ ಹೊಲಕ ಹೋಗಿ
ಮಾವಿನಕಾಯಿ ಪೇರಲಕಾಯಿ ತಿಂದ
ಬುತ್ತಿ ಉಂಡ ಮ್ಯಾಲ ಮಜ್ಜಿಗಿ ಕುಡದ
ಹೊಲತುಂಬ ಓಡ್ಯಾಡಿ ಕುಣಿದಾಡಿ ಕುಪ್ಪಳಿಸಿದ್ಹಂಗ-

ಜೊಕಾಲಿಯಿಂದ ಬಿದ್ದು ಕಾಲಮುರಕೊಂಡು
ಚಿಗಳಿ ತಿನ್ನೋ ಆಸೇಕ
ಕಂಚಿಗಿಡದ ಮುಳ್ಳ ಚುಚ್ಚಿಸಿಕೊಂಡು
ಬಿಕ್ಕಿಬಿಕ್ಕಿ ಬಿಕ್ಕಿಬಿಕ್ಕಿ ಅತ್ಹಂಗ –

ಮತ್ತ ನಮ್ಮ ಅಜ್ಜಿ ತನ್ನ ಎದ್ಯಾಗೆ
ನನ್ನ ಎಳಕೊಂಡು ರಮಿಸಿ
ಬಣ್ಣದ ನೀರ ಹಾಕಿದ ಬರ್ಫ
ನೀರಲಹಣ್ಣ ಬಾರಿಹಣ್ಣ ಕೊಡಿಸಿ
ಮಾರಾಂವಗ ಗುಳಬುಟ್ಟಿ ತುಂಬ
ಭತ್ತ ಕೊಟ್ಹಂಗ-
ಹಿಂಗ ಇನ್ನೂ ಕನಸಽ ಕನಸ.

ಹಾಲಿವುಡ್ ಪಿಕ್ಚರ್
ಇನ್ನೂ ಅರ್ಧ ನೋಡಬೇಕಾಗಿತ್ತು
ಬೆಳಿಗ್ಗೆ ಊರಿಂದ phoneಬಂತು
ಬಹಳ ವರ್ಷದ ಮ್ಯಾಲ ದೇವಿ ಜಾತ್ರಿ
ಊರಿಗೆ ಎಲ್ಲಾರೂ ಬರ್ರಿ.

ಹಂಗಾದ್ರ ನಾ ರಾತ್ರಿ ಕಂಡದ್ದೆಲ್ಲಾ
ಚೆಂದಾದ ಕನಸು ನನಸಾಗೋದಾದ್ರ
ಮತ್ತೊಮ್ಮೆ ನಾ ಸಣ್ಣ ಹುಡುಗಿಯಾಗಿ
ಗರ್ದಿಗಮ್ಮತ್ತ ನೋಡತೇನಿ ಅಂದ್ರ
ಜೋಕಾಲಿ, ಜಾತ್ರಿ, ಹೊಲ, ಚಕಡಿ
ಅಂತ ಓಡಾಡತೇನಿ ಅಂದ್ರ,

ಈ ಕನಸು ವಿಚಿತ್ರ ಅಲ್ಲದಽ ಮತ್ತಿನ್ನೇನು!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಾರಾ
Next post ಸುವ್ವಾಲೆ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys